ಭವದ ಹೊರೆ

ಕೇಶವೇ ವಸ್ತ್ರವೆಂದು
ಅದನ್ನೆ ಮೈ ತುಂಬಾ ಹೊದ್ದು
ಉಟ್ಟಿದ್ದೆಲ್ಲವ ಬಿಸುಟು
ಹೊರಟೇಬಿಟ್ಟೆಯಲ್ಲೆ ಅಕ್ಕ
ಮರೆಯಲು ಮನದಾಳದ ದುಃಖ
ನಿನಗಾಗಿ ಅಲ್ಲಿದ್ದ ಚೆನ್ನ
ಹುಡುಕಿ ಹೊರಟೆ ಅವನನ್ನೆ
ಲೋಕದಿದಿರು ನೀ ಆದೆ ಭಿನ್ನೆ
ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ
ಬೇಡವೆನಿಸಿದ ಬದುಕು ಬಿಟ್ಟೆ
ಬೇಡವೆನಿಸಿದೆ ಭವದ ಬದುಕು
ಹೇಗೆ ಬಿಟ್ಟು ಬಿಡಲೇ ಅಕ್ಕ
ಬಣ್ಣಗೆಟ್ಟ ಬದುಕಿನಿರುಳಲಿ
ಹೊರಳಿ ನರಳಿದೆ ಎತ್ತಲೆತ್ತಲೋ
ಹಾದಿ ಹುಡುಕಿ ಹೊರಟ ಮನಸ್ಸು,
ಮನಸಲೊಬ್ಬ ದೇಹಕ್ಕೊಬ್ಬ
ಗಂಡಹೆಂಡಿರಾಟದ ಮೈಥುನ
ಕಿತ್ತೆಸೆಯಲಾರದ ಬಂಧನ
ಹೊರಲಾರದ ಭವದ ಹೊರೆಗೆ
ಮನದ ನಡು ಬಾಗಿದೆ
ಹೊತ್ತ ಹೊರೆಯ ಇಳಿಸುವುದೆಂತು
ತೋರೆ

ಸೋತು ಮಲಗಿದೆ ಜೀವಧಾರೆ
ಬಂದು ಬಿಡಲೇ ಕದಳಿಗೆ
ಇದ್ದಾನೇನು ಚೆನ್ನ ಇನ್ನು ಅಲ್ಲಿ
ಬೇಡವಾದ ಬಂಧನದ ಬೇಡಿ
ಕಳಚುವುದೆಂತು ಹೇಳೆ,
ನಿನ್ನಂತರಂಗವ ಒಪ್ಪಿದವರಿದ್ದರು
ಅಂದು
ಇಂದಿದ್ದಾರೇನೇ ಬಸವ ಅಲ್ಲಮರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದಿಷ್ಟು ಹಸಿ ಮಣ್ಣು
Next post ಸಾವಿನ ಮನೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys